ಅಂಬಾಟಿ ರಾಯುಡು, ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ವಿಶ್ವಕಪ್ ಭಾರತ ತಂಡದ ರೇಸ್ನಲ್ಲಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಪಂತ್ ಮೇಲೆ ಆಯ್ಕೆದಾರರ ಕಣ್ಣಿದೆ. ಭಯವಿಲ್ಲದೆ ಬ್ಯಾಟ್ ಬೀಸುವ ಪಂತ್, ಆಡಿರುವುದು ಕೇವಲ 5 ಏಕದಿನ ಪಂದ್ಯಗಳು ಮಾತ್ರ. ಸ್ಪಿನ್ನರ್ ಹಾಗೂ ಮಧ್ಯಮ ವೇಗಿಗಳನ್ನು ಸರಿಯಾಗಿ ದಂಡಿಸುವ ಸಾಮರ್ಥ್ಯ ಪಂತ್ಗಿದೆ. ಹಾಗಾಗಿ, ಮಧ್ಯಮ ಕ್ರಮಾಂಕದಲ್ಲಿ ಪಂತ್ ಅವರನ್ನು ಆಡಿಸುವ ಬಗ್ಗೆ ಆಯ್ಕೆದಾರರಿಗೆ ಒಲವು ಹೆಚ್ಚಿದೆ.